ಏಕೆ ನೀನು ತೊರೆದು ಹೋದೆ
ನಾನು ಈಗ ಒಂಟಿಯಾದೆ
ಯಾವ ಕಾರಣ ಹೇಳು ನೀನು
ಆದ ತಪ್ಪಿನ ವಿಷಯವೇನು
ತಿದ್ದಿಕೊಳಲು ನೀಡು ಅವಕಾಶ
ನೀನಿಲ್ಲದೆ ನನಗಿಲ್ಲ ಸಂತೋಷ
ನೀನು ಇರದೆ ಸೂರ್ಯ ಬರನು
ನನ್ನ ಬರಡು ಬಾಳಲಿ
ನಿನ್ನ ಮಾತು ಕೇಳದಿರೆನು
ನನ್ನ ನೋವ ಯಾರಿಗೆ ಹೇಳಲಿ
ನಿನ್ನ ಒಂದು ನಗುವೆ ಸಾಕು
ಈ ನನ್ನ ಜೀವ ಬದುಕಲು
ಎಲ್ಲಿಗೆ ಹೋಗಿ ನಿಲ್ಲಲಿ !
ಆದ ಗಾಯ ಮಾಯಲು
ನೀನೇ ನನ್ನ ಬದುಕು ಎಂದು
ಭವದ ಬೇಟೆಗೆ ಬಂದೆನು
ನೀನೇ ಇರದೆ ಹೋದ ಮೇಲೆ
ಯಾರಿಗಾಗಿ ಬದುಕಲಿ ಇನ್ನು
ಮನಸು ಬದಲಿಸು ನನ್ನ ಮನ್ನಿಸು
ಮತ್ತೆ ನೀಡದಿರು ನೋವನು
ಪಶ್ಚಾತ್ತಾಪಕಿಂತ ಶರಣಾಗತಿಯುಂಟೆ
ಕೈಹಿಡಿದು ನಡೆಸೆನ್ನನು
0724ಎಎಂ09042018
ಅಮುಭಾವಜೀವಿ
ಶಶಿರೇಖ ವಿಜಯಪುರ ಅವರ ಪ್ರತಿಕ್ರಿಯೆ
ಒಂದೊಂದು ಬಾರಿ ತಪ್ಪೇ ಇಲ್ಲದ ಮನವನ್ನ ಅಪಾರ್ಥ ಮಾಡಿಕೊಂಡೂ ಪ್ರೀತಿಸಿದ ಮನಸು ದೂರಾ ಹೋಗುತ್ತದೆ
ಆದರೂ ಈ ಪ್ರೇಮಿಯ ಮನಸು ತಪ್ಪಿದ್ದರೆ ತಿಳಿಸಿಬಿಡು ತೊದ್ದಿಕೋತೀನಿ ಅಂತ ಹೇಳತ್ತಲ್ಲ ಆ ಭಾವ ಕೊಡುವಂತಹ ಖುಷಿಯನ್ನ ಇನ್ಯಾವ ಭಾವ ಕೂಡಾ ಕೊಡಲ್ಲ ಅನಿಸತ್ತೆ
👌👌👌👌 ಸುಪರ್ ಅಮು ಸರ್ 🙏🙏🙏
No comments:
Post a Comment