Saturday, June 22, 2019

ಛಂದಸ್ಸು

ಛಂದಸ್ಸು

ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.
ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.

ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ

ಪ್ರಾಸಯತಿಗಣ

ಪ್ರಾಸ

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.

ಯತಿಸಂಪಾದಿಸಿ

ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.

ಗಣಸಂಪಾದಿಸಿ

ಗಣ ಎಂದರೆ ಗುಂಪು.ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪು. ಈ ಗಣಗಳನ್ನು ಕಟ್ಟುವ ಘಟಕಗಳು ಎಂದರೆ ಹ್ರಸ್ವ ದೀರ್ಘಾಕ್ಷರಗಳು .ಇದರಲ್ಲಿ 'ವರ್ಣಗಣ' ಅಥವಾ'ಅಕ್ಷರಗಣ','ಮಾತ್ರಾಗಣ' ಮತ್ತು 'ಅಂಶಗಣ'ಗಳೆಂಬ ಮೂರು ವಿಧದ ಗಣಗಳಿವೆ.ಅಕ್ಷರಗಳನ್ನು ಆಧರಿಸಿ ಮಾಡಿದ ಗುಂಪು ವರ್ಣಗಣ /ಅಕ್ಷರಗಣವೆನಿಸುತ್ತದೆ. ಈ ಅಕ್ಷರಗಳನ್ನು ಸಂಸ್ಕೃತ ಛಂದಸ್ಸಿನಿಂದ ಕನ್ನಡವು ಪಡೆದುಕೊಂಡಿದೆ.ಮೂರು ಮೂರು ಅಕ್ಷರಗಳನ್ನು ಎಣಿಸಿ ಗಣವಿಭಾಗಿಸಲಾಗುವುದು.

ಮಾತ್ರಾಗಣಸಂಪಾದಿಸಿ

ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.

ಮಾತ್ರೆಸಂಪಾದಿಸಿ

ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.

ಲಘುಸಂಪಾದಿಸಿ

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

ಗುರುಸಂಪಾದಿಸಿ

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.

ಪ್ರಸ್ತಾರಸಂಪಾದಿಸಿ

ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

ಅಕ್ಷರವು ಗುರು ಎನಿಸುವ ಲಕ್ಷಣಗಳುಸಂಪಾದಿಸಿಲಕ್ಷಣಉದಾಹರಣೆದೀರ್ಘಾಕ್ಷರ_ U 
ಶಾಲೆಒತ್ತಕ್ಷರದ ಹಿಂದಿನ ಅಕ್ಷರ_ U U U 
ಒ ತ್ತಿ ನ ಣೆಅನುಸ್ವಾರದಿಂದ ಕೂಡಿರುವ ಅಕ್ಷರ_   U  U 
ಬಂ ದ ನುವಿಸರ್ಗದಿಂದ ಕೂಡಿರುವ ಅಕ್ಷರ_  U 
ದುಃಖವ್ಯಂಜನಾಕ್ಷರದಿಂದ ಕೂಡಿದ ಅಕ್ಷರU U   _
ಮನದೊಳ್ಐ ಸ್ವರವಿರುವ ಅಕ್ಷರ_   U   U 
ಕೈ ಮು ಗಿಔ ಸ್ವರವಿರುವ ಅಕ್ಷರ_    U 
ಮೌ ನಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ ಅಕ್ಷರವು ಲಘು ಎನಿಸುವ ಲಕ್ಷಣಗಳುಸಂಪಾದಿಸಿ

ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.

ಮಾತ್ರಾಗಣ ಆಧಾರಿತ ಛಂದಸ್ಸುಗಳುಸಂಪಾದಿಸಿಕಂದ ಪದ್ಯಸಂಪಾದಿಸಿಕಂದ ಪದ್ಯ ಷಟ್ಪದಿಸಂಪಾದಿಸಿಷಟ್ಪದಿ ರಗಳೆಸಂಪಾದಿಸಿಅಕ್ಷರಗಣಸಂಪಾದಿಸಿ

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

ಯಗಣಮಗಣತಗಣರಗಣಜಗಣಭಗಣನಗಣಸಗಣಯಮಾತಾರಾಜಭಾನ ಸಲಗಂ ಸೂತ್ರಸಂಪಾದಿಸಿ

ಅಕ್ಷರಗಣಗಳನ್ನು ಯಮಾತಾರಾಜಭಾನಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

ಗಣಅಕ್ಷರಗಳುಪ್ರಸ್ತಾರಯಗಣಯಮಾತಾU   _   _ಮಗಣಮಾತಾರಾ_   _   _ತಗಣತಾರಾಜ_   _   Uರಗಣರಾಜಭಾ_   U   _ಜಗಣಜಭಾನU   _   Uಭಗಣಭಾನಸ_   U   UನಗಣನಸಲU   U   UಸಗಣಸಲಗಂU   U   _ಗಣಗಳನ್ನು ಗುರುತಿಸುವ ಪದ್ಯಸಂಪಾದಿಸಿ

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ ಮ - ನ - ಗಣ
ಗುರು ಲಘು ಮೊದಲಲ್ಲಿ ಬರಲು ಭ - ಯ - ಗಣಮೆಂಬರ್
ಗುರು ಲಘು ನಡುವಿರೆ ಜ - ರ - ಗಣ
ಗುರು ಲಘು ಕೊನೆಯಲ್ಲಿ ಬರಲು ಸ - ತ - ಗಣಮಕ್ಕುಂ

ವೃತ್ತಗಳುಸಂಪಾದಿಸಿ

ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ.ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.
ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳು ಎಂದು ಕರೆಯುತ್ತಾರೆ.

ಅವುಗಳು,ಉತ್ಪಲ ಮಾಲಾ ವೃತ್ತಚಂಪಕ ಮಾಲಾ ವೃತ್ತಶಾರ್ದೂಲವಿಕ್ರೀಡಿತ ವೃತ್ತಮತ್ತೇಭವಿಕ್ರೀಡಿತ ವೃತ್ತಸ್ರಗ್ಧರಾ ವೃತ್ತಮಹಾಸ್ರಗ್ಧರಾ ವೃತ್ತಅಂಶಗಣಸಂಪಾದಿಸಿ

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ.ಇದನ್ನು ನಾಗವರ್ಮನು "ಕರ್ಣಾಟಕ ವಿಷಯಜಾತಿ" ಎಂದೂ ಹಾಗೇ ಜಯಕೀರ್ತಿಯು "ಕರ್ಣಾಟಕವಿಷಯಭಾಷಾಜಾತಿ" ಎಂದೂ ಕರೆದಿದ್ದಾರೆ.
ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.
ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾ:- "ಕವಿತೆ" ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. 'ಕವಿ' ಎಂಬುದು ಒಂದು ಅಂಶವಾದರೆ 'ತೆ' ಎಂಬುದು ಇನ್ನೊಂದು ಅಂಶವಾಗುತ್ತದೆ,
ಇದರಲ್ಲಿ ಮೂರು ವಿಧ. ಅವನ್ನುಬ್ರಹ್ಮಗಣ,ವಿಷ್ಣುಗಣ,ರುದ್ರಗಣ ಎಂದು ಕರೆಯುವರು.
(ವಿ.ಸೂ- ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.) ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು
೧. ಗು,ಗು 
೨. ಗು,ಲ
೩,ಲಲ,ಗು 
೪.ಲಲ,ಲ
ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಅವುಗಳ ವಿಧಗಳು ಹೀಗಿವೆ-
೧.ಗು,ಲ,ಲ
೨.ಗು,ಗು,ಲ
೩.ಗು,ಗು,ಗು
೪.ಗು,ಲ,ಗು
೫.ಲಲ,ಗು,ಗು
೬.ಲಲ,ಗು,ಲ
೭.ಲಲ,ಲ,ಗು
೮.ಲಲ,ಲ,ಲ
ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು
೧.ಗು,ಲ,ಲ,ಲ
೨.ಗು,ಗು,ಲ,ಲ
೩.ಗು,ಗು,ಗು,ಲ
೪.ಗು,ಗು,ಗು,ಗು
೬,ಗು,ಲ,ಗು,ಲ
೭,ಗು,ಲ,ಲ,ಗು
೮. ಗು,ಗು,ಲ,ಗು
೯.ಗು,ಲ,ಗು,ಗು,ಇತ್ಯಾದಿ, ಹಾಗೆಯೇ ಮೊದಲ ಗುರುವಿನ ಬದಲು ಎರಡು ಲಘುಗಳನ್ನು ಇಟ್ಟುಕೊಂಡು ಕೂಡ ಗಣಗಳನ್ನು ರಚಿಸಬಹುದು. ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ ಪಿರಿಯಕ್ಕರ,ಇತ್ಯಾದಿಗಳು ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು.
ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ.

No comments:

Post a Comment