ಬದುಕಬೇಕು ನಾನು
ಬರಲು ಸೋಲು ನೋವುಗಳೇನು
ಒಲವಿಗಾಗಿ ಹಂಬಲಿಸಲು ನಾನು
ಕಾರ್ಮುಗಿಲಲ್ಲಿ ಮಿಂಚಾಗಿ ಬಂದೆ ನೀನು
ನಿರಾಸೆಯ ವಿಷವೇರಿ ಬಾಳಿಗೆ
ಭರವಸೆಯನೇ ಕೊಂದಿತ್ತು ನಾಳೆಗೆ
ಮುಳುಗುವ ಈ ಅಣು ಜೀವಿಗೆ
ಹುಲ್ಲುಕಡ್ಡಿಯಾಗಿ ಬಂದೆ ನನ್ನ ಸೇವೆಗೆ
ಹಂಗಿಸುವವರೊಡನೆಲ್ಲ
ಜಂಗಿ ಕುಸ್ತಿಯನಾಡಿಸಿದೆ
ಪ್ರೀತಿಸುವವರೊಡಗೂಡಿಸಿ
ಸ್ಥಿತಿಗತಿಯೇನು ಉತ್ತುಂಗಕ್ಕೇರಿಸಿದೆ
ಒಲವಿನ ಬೀಜವ ಬಿತ್ತಿ
ಬೀಳಿಸಿದೆ ನನ್ನನ್ನು ಹೆಮ್ಮರವಾಗಿ
ನಾ ರೆಂಬೆ-ಕೊಂಬೆ ಚಾಚಿದರು
ಮರೆಯದೆ ನೀ ಜೊತೆಗಿದ್ದೆ ನೆರಳಾಗಿ
ನಾನೆಂಬ ಹೆಮ್ಮೆಯು ನಿನ್ನಿಂದ
ನೀ ತಂದೆ ಬದುಕಿಗೆ ಆನಂದ
ನಿನಗೆಂದೆಂದೂ ಮೀಸಲು ಹೃದಯ ಸಿಂಹಾಸನ
ಅಲ್ಲಿಂದಲೇ ನನಗೆ ಹೇಳಿದರು ಆಶೀರ್ವಚನ
11102014
*ಅಮು ಭಾವಜೀವಿ*
No comments:
Post a Comment