ಸಂಜೆಯಿದು ಜಾರುತಿದೆ
ಏಕಾಂತ ಕಾಯುತಿದೆ
ಬಂದು ಬಿಡು ಬೇಗ ನೀನು
ನೀಲಾಗಸ ಕಪ್ಪಾಗುತಿದೆ
ಒಂಟಿತನ ಕಾಡುತಿದೆ
ಬಂದು ಸೇರು ಮರೆಯದೆ ನನ್ನನು
ಇರುಳು ಕವಿಯುವ ಮೊದಲು
ಬಾನ ರಂಗು ಮಾಸುತಿರಲು
ಆತಂಕವಿದು ಅಧಿಕವಾಗುತಿದೆ
ಬೆರಳು ತೀಡಿದ ವೀಣೆ
ಉಲಿವ ರಾಗವು ನಿನ್ನದೇನೇ
ತವಕ ಬದುಕ ತಲ್ಲಣಿಸಿದೆ
ತಂಪು ತಂಗಾಳಿಯೊಂದಿಗೆ
ಬೆಳದಿಂಗಳು ಬೆರೆತಂತೆ
ನಾವೊಂದಾಗೋಣ ಬಾ
ನಶೆಯಿದು ಕಳೆದುಹೋಗಿ
ಉಷೆ ಮೂಡುವ ಸಮಯಕ್ಕೆ
ಇಬ್ಬನಿಯ ಹನಿಗಳಲಿ ಮೀಯೋಣ ಬಾ
0634ಪಿಎಂ19062019
*ಅಮು ಭಾವಜೀವಿ*
No comments:
Post a Comment