*ನೆನಪುಗಳ ಕ್ರೌರ್ಯ*
ಮನದ ಬಾನಲಿ ತೇಲುತಿದೆ
ಸುಂದರ ಚಂದಿರನ ಹೆಣ
ನಿನ್ನ ಈ ಮೌನ ತಂದ
ನೋವೇ ಅದಕೆಲ್ಲ ಕಾರಣ
ಕೋಟಿ ತಾರೆಗಳು ಕಂಬನಿ
ಮಿಡಿದು ಬೀಳ್ಕೊಡುತಿವೆ
ನೈದಿಲೆಯು ವಿರಹದ
ಬಾಣಲೆಗೆ ಬಿದ್ದು ಬೇಯುತಿದೆ
ಉಕ್ಕುವ ಅಲೆಗಳಲೂ
ಅದೇ ನೀರವ ಮೌನ
ಕಾರ್ಗತ್ತಲ ಹಾದಿಯಲ್ಲಿ
ದಾರಿಕಾಣದಾಗಿದೆ ಮನ
ಒಲವ ಬೆಳದಿಂಗಳ
ಮುದವಿಲ್ಲದೆ ದಣಿದಿದೆ ತನುವು
ಹುಣ್ಣಿಮೆಯ ಭ್ರಮೆಯಲ್ಲಿ
ಅಮವಾಸ್ಯೆಯ ಕರಾಳಕೆ ಬೆದರಿತು ಮನವು
ಕಾಲದ ಈಟಿಯು ಕ್ಷಣ ಕ್ಷಣಕ್ಕೂ
ತಿವಿಯುತಿದೆ ಜಾಗೃತವಾಗೆಂದು
ನಂಬಿದ ಬದುಕೇ ನರಳಿ ಕೂತಿದೆ
ಚಂದಿರನು ಮತ್ತೆ ಸಿಗನೆಂದು
ಅವನ ದಿನದ ಕಾರ್ಯಗಳಿಗಿಂತ
ನೆನಪುಗಳ ಕ್ರೌರ್ಯ ನಿತ್ಯ ಕೊಲ್ಲುತಿದೆ
ನನ್ನವನ ಬಿಟ್ಟು ಹೋದ ಈ ಖಾಲಿತನ
ಬದುಕಿನುದ್ದಕ್ಕೂ ಬೆಂಬಿಡದೆ ಕಾಡಿದೆ
0922ಎಎಂ28102018
*ಅಮು ಭಾವಜೀವಿ*
ಸಿರಾ
No comments:
Post a Comment