Friday, June 14, 2019

*ಹಾಯ್ಕು*

*ಬರ*

ಬರವು ಬಂದು
ನೀರಿಗಾಗಿ ಜನರು
ಬೇಡುತಿಹರು

ಕಾಡು ನಾಶಕ್ಕೆ
ಮಳೆ ಮುನಿದು ಕೂತಾಗ
ಬರ ಸಾಮಾನ್ಯ

ಕಾಡ್ಗಿಚ್ಚು ಹೊತ್ತಿ
ಸುಟ್ಟು ಹಾಕಿತು ಎಲ್ಲ
ನೀರವ ಮೌನ

ಬೆಂದ ಬದುಕು
ಬಸವಳಿದು ಬರ
ನೀಗೆಂದಿಹುದು

ಪರಿಸರವು
ಅವಸರವಾಗೀಗ
ನಾಶವಾಯಿತು

ನಿಸರ್ಗವೀಗ
ದಂಗು ಬಡಿಸಿದೆ ಈ
ದುಷ್ಟರ ಕಂಡು

ಮಳೆ ಬರಲಿ
ಬುವಿ ನೆನೆದು ತಂಪು
ಜಗ ತುಂಬಲಿ

0241ಪಿಎಂ20052019

*ಅಮು ಭಾವಜೀವಿ*

No comments:

Post a Comment